LIVE TV LocalCrimeNationalInternationalPoliticsEducationTechnologyEntertainmentSportsFeature
State News

ಶಿಕ್ಷಣ ಸಚಿವರಿಗೆ ಪತ್ರ ಬರೆದ ರಾಜ್ಯದ ಶಿಕ್ಷಕರು - ಪತ್ರದಲ್ಲಿ ಬರೆದಿದ್ದೇನು ಒತ್ತಾಯಿಸಿದ್ದೇನು ಶಿಕ್ಷಕರ ಪತ್ರ ವೈರಲ್.....

ಬೆಂಗಳೂರು -

ರಾಜ್ಯದ ಶಿಕ್ಷಕರು ಶಿಕ್ಷಣ ಸಚಿವರಿಗೆ ಪತ್ರವೊಂದನ್ನು ಬರೆದಿದ್ದಾರೆ ಹೌದು

ಇವರಿಗೆ ಸನ್ಮಾನ್ಯ ಶ್ರೀ ಮಧು ಬಂಗಾರಪ್ಪ ಸರ್ ರವರು ಸಾರ್ವಜನಿಕ ಶಾಲಾ ಶಿಕ್ಷಣ ಸಚಿವರು ಕರ್ನಾಟಕ ಸರ್ಕಾರ ವಿಧಾನ ಸೌಧ ಬೆಂಗಳೂರು ಸನ್ಮಾನ್ಯರೆ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ.. ಶಾಲಾ ವಿಭಾಗದಲ್ಲಿ ಪ್ರಸ್ತುತ ಅವಧಿಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಜಂಟಿ ಸಹ ನಿರ್ದೇಶಕರು ಹುದ್ದೆಗೆ ಬಡ್ತಿಯನ್ನು ಕಲ್ಪಿಸಿ ಕೊಡುವ ಬಗ್ಗೆ

ಈ ಮೇಲ್ಕಂಡ ವಿಷಯಕ್ಕೆ ಸಂಬಂಧ ಪಟ್ಟಂತೆ ಪ್ರಸ್ತುತ ಖಾಲಿ ಇರುವ ಸಾರ್ವಜನಿಕ ಶಾಲಾ ಶಿಕ್ಷಣ ಇಲಾಖೆ ಯಲ್ಲಿ ಉಪ ನಿರ್ದೇಶಕರ ಹುದ್ದೆಯಿಂದ ಖಾಲಿ ಹುದ್ದೆ ಗಳಿಗೆ ಜಂಟಿ. ಸಹ ನಿರ್ದೇಶಕರು ಹುದ್ದೆಗೆ ಬಡ್ತಿ ನೀಡಲು ತುರ್ತಾಗಿ ಡಿ.ಪಿ.ಸಿ ಮಾಡಬೇಕಾಗಿರುತ್ತದೆ ಸದರಿ ಸಂಬಂಧ ವಯೋ ನಿವೃತ್ತಿ ಇನ್ನಿತರೆ ಕಾರಣ ಗಳಿಂದ ತೆರವಾಗಿರುವ ಸಹ ನಿರ್ದೇಶಕರ ಹುದ್ದೆ ಗಳಿಗೆ ಕಳೆದ ಒಂದು ವರ್ಷಕ್ಕಿಂತ ಹೆಚ್ಚಿನ ಅವಧಿ ಯಿಂದ ಉಪ ನಿರ್ದೇಶಕರ ಹುದ್ದೆಯಿಂದ ಜಂಟಿ ಸಹ ನಿರ್ದೇಶಕರು ಹುದ್ದೆಗೆ ಪ್ರಸ್ತುತ ಡಿ.ಪಿ.ಸಿ. ಮಾಡದಿರುವ ಕಾರಣ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ಮತ್ತು ಸಿಬ್ಬಂದಿ ವರ್ಗದವರ ಅನೇಕ ತುರ್ತು ಕೆಲಸ ಕಾರ್ಯಗಳು ಆದೇಶಗಳು ಜಾರಿಯಾಗದೆ ಬಾಕಿ ಉಳಿದಿರುತ್ತೇವೆ

ಇದರಿಂದ ಸರ್ಕಾರಿ ಅನುದಾನಿತ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ವೃಂದ ಇಲಾಖೆಯ ಸಿಬ್ಬಂದಿ ವೃಂದ ತುಂಬಾ ತೊಂದರೆಗಳನ್ನು ಅನುಭವಿಸುವಂ ತಾಗಿರುತ್ತದೆ ಖಾಲಿ ಇರುವ ಸಹ ನಿರ್ದೇಶಕರ ಹುದ್ದೆಗೆ ತಾತ್ಕಾಲಿಕವಾಗಿ ನಿಯೋಜನೆಯಲ್ಲಿ ಉಪ ನಿರ್ದೇಶ ಕರ ಶ್ರೇಣಿಯವರನ್ನು ಸಹ ನಿರ್ದೇಶಕರ ಹುದ್ದೆಗೆ ನಿಯೋಜನೆ ಮಾಡಿರುವಂತ ಅಧಿಕಾರಿಗಳು ನಮಗೆ ಹೆಚ್ಚುವರಿ ಜವಬ್ದಾರಿ ಬೇಡ ಒಂದೇ ಹುದ್ದೆಯಲ್ಲಿ ಸಾಕಷ್ಟು ಕೆಲಸ ಕಾರ್ಯಗಳು ಸ್ಥಗಿತವಾಗಿರುತ್ತದೆ

ಹಾಗೂ ಇನ್ನು ಅನೇಕ ತುರ್ತಾಗಿ ಸರ್ಕಾರ ಇಲಾಖೆ ವಹಿಸಿರುವ ಪರೀಕ್ಷಾ ಸಂಬಂಧ ಪಟ್ಟ ಜವಬ್ದಾರಿಯು ತವಾದ ಕೆಲಸಗಳನ್ನು ಕಾರ್ಯಗತವನ್ನು ಮಾಡಬೇ ಕಾಗಿರುತ್ತದೆ ಆದ್ದರಿಂದ ನಿಯೋಜನೆಯ ಆದೇಶ ವನ್ನು ರದ್ದು ಪಡಿಸಿ ಎಂದು ಉಪ ನಿರ್ದೇಶಕರು C.S. ಡಿ. ಡಿ. ಪಿ.ಐ ಕಛೇರಿ ಶಿಕ್ಷಕರ ಸದನ ಸಹ ನಿರ್ದೇ ಶಕರ ಬೆಂಗಳೂರು ೦1.ಹತ್ತಿರ ಬೆಂಗಳೂರು ರವರು ಸಾರ್ವಜನಿಕ ಶಾಲಾ ಶಿಕ್ಷಣ ಇಲಾಖೆ ಮಾನ್ಯ ಆಯುಕ್ತರು ಮಾನ್ಯ ಪ್ರಧಾನ ಕಾರ್ಯದರ್ಶಿ ರವರಲ್ಲಿ ಲಿಖಿತ ಮನವಿ ಸಲ್ಲಿಸಿ ಬದಲಾವಣೆಯಾಗುತ್ತಿದ್ದಾರೆ

ಬದಲಾವಣೆಯಾಗಿರುತ್ತಾರೆ (ಉದಾ. ಬೆಂಗಳೂರು ವಿಭಾಗ ೦1) ಈ ಹುದ್ದೆಗೆ ನಿಯೋಜನೆಯ ಮುಖಾಂತರ ಉಪ ನಿರ್ದೇಶಕರನ್ನು ಪ್ರಸ್ತುತ ನಿಯೋಜನೆಯನ್ನು ಮಾಡಿರುತ್ತಾರೆ ಇವರು ಸಹ ಈ ಮೊದಲಿನ ಪ್ರಭಾರಿ ಅಧಿಕಾರಿಗಳ ಮಾದರಿಯನ್ನು ಅನುಸರಿಸುತ್ತಿದ್ದಾರೆ ಎನ್ನುವ ಮಾತುಗಳು ಸಿಬ್ಬಂದಿ ವರ್ಗ ದವರಿಂದ ಕೇಳಿ ಬಂದಿರುತ್ತದೆ ಆದ್ದರಿಂದ ಪ್ರಸ್ತುತ ಹಿರಿಯ ಶ್ರೇಣಿ ಉಪ ನಿರ್ದೇಶಕರಿಗೆ ಡಿ.ಪಿ.ಸಿ ಮಾಡಿ ನಂತರ ತುರ್ತಾಗಿ ಖಾಲಿ ಇರುವ ಬೆಂಗಳೂರು ವಿಭಾಗ 01.ಸಹ ನಿರ್ದೇಶಕರ ಹುದ್ದೆ ಹಾಗೂ ಇತರೆ ಖಾಲಿ ಇರುವ ಸಹ ನಿರ್ದೇಶಕರ ಹುದ್ದೆ ಗಳನ್ನು ಭರ್ತಿ ಮಾಡಬೇಕಾಗಿರುತ್ತದೆ ಇಲ್ಲ ವಾದರೆ ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಜಂಟಿ..ಸಹ ನಿರ್ದೇಶಕರಿಗೆ ಖಾಲಿ ಇರುವ ಹುದ್ದೆಗೆ ಹೆಚ್ಚುವರಿ ವಿಶಿಷ್ಟ ಚಾರ್ಜ್ ಪ್ರಭಾರಿ ನಿಯೋಜನೆ ಅಧಿಕಾರ ವ್ಯವಸ್ಥೆ ಯೊಂದಿಗೆ ನಿಯೋಜನೆ ಕಲ್ಪಿಸಿ ಕೊಡುವುದರ ಮೂಲಕ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರು ಸಲ್ಲಿಸಿರುವ ಮನವಿಯ ಅನುಸಾರ ಶಿಕ್ಷಕರ ಸಮಸ್ಯೆಗಳನ್ನು ಪ್ರತೇಕ್ಷ ವಾಗಿ ಪರೋಕ್ಷವಾಗಿ ಪರಿಶೀಲನೆ ಮಾಡಿ ಸೂಕ್ತ ಆದೇಶಗಳ ಮುಖಾಂತರ ಪರಿಹಾರವನ್ನು ಕಲ್ಪಿಸಿಕೊಡುವ ಅವಶ್ಯಕತೆ ಇರುತ್ತದೆ

ಅದರೆ ಪ್ರಸ್ತುತ ನಿಯೋಜನೆ ಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನಿಯೋಜನೆ ಜಂಟಿ ನಿರ್ದೇಶಕರು ಅಧಿಕಾರಿಗಳು ಶಿಕ್ಷಕರ ಲಿಖಿತ ಮನವಿಯ ಅನುಸಾರ ಪರಿಶೀಲನೆ ಮಾಡಿ ಆದೇಶ ಕಲ್ಪಿಸಿ ಕೊಡುವ ವಿಚಾರ ದಲ್ಲಿ ಪ್ರಬಾರಿ ಅಧಿಕಾರಿಗಳು ಶಿಕ್ಷಕರ ಮನವಿಯ ಕೋರಿಕೆ ಅನುಸಾರ ಪರಿಶೀಲನೆ ಮಾಡಿ ಆದೇಶ ಜಾರಿ ಮಾಡಿ ಅನುಕೂಲ ಕಲ್ಪಿಸಿ ಕೊಡಲು ಪ್ರಸ್ತುತ ಪ್ರಭಾರಿ ಜಂಟಿ ನಿರ್ದೇಶಕರು ಅಧಿಕಾರಿಗಳು ಪೂರ್ಣ ರೀತಿಯ ಅಧಿಕಾರ ಇರುವ ಸಹ ನಿರ್ದೇಶ ಕರು ಆದೇಶವನ್ನು ಜಾರಿ ಮಾಡಲಿ ನಾವೇಕೆ ಆದೇಶಗಳನ್ನು ಜಾರಿ ಮಾಡಬೇಕು ಇದರಿಂದ ತಪ್ಪು ಮಾಡಿರುವ ವಿವಿಧ ಜಿಲ್ಲೆಯ ಉಪ ನಿರ್ದೇಶಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕೈ ಗೊಂಡಿರುವ ಕ್ರಮಗಳು K.C.S.R C.C.A ನಿಯಮಗಳಿಗೆ ವಿರುದ್ಧ ವಾಗಿರುವುದು ಕಂಡು ಬಂದಿರುತ್ತದೆ

ಈ ಅಧಿಕಾರಿಗಳ ಒತ್ತಡ ಅಧಿಕಾರಿಗಳ ಪರವಾಗಿ ಅದೇಶಿಸಿ ಎನ್ನುವ ಒತ್ತಡ ಏರಿಕೆ ) KCSR - CCA ನಿಯಮಗಳನ್ನು ಅನುಸರಿಸಿ ಸೂಕ್ತ ಆದೇಶಗನ್ನು ಮಾಡಿದರೆ ಒಂದು ಕಡೆಗೆ ಇದರಿಂದ ನಮ್ಮ ಮೇಲೆ ಯಾವ ರೀತಿಯಲ್ಲಿ ಪರಿಣಾಮ ಬಿರುತ್ತದೋ ಎನ್ನುವ ಭಯವನ್ನು ಸಹ ಪಡುತ್ತಾರೆ ಎನ್ನುವ ಮಾತುಗಳು ಸಿಬ್ಬಂದಿ ವರ್ಗ ದವರಿಂದ ಕೇಳಿ ಬಂದಿರುತ್ತದೆ ಈ ಕಾರಣಗಳಿಂದ ಉಪ ನಿರ್ದೇಶಕರು ಶ್ರೇಣಿ ಹಂತ ಸಹ ನಿರ್ದೇಶಕರು ಹೆಚ್ಚು ವರಿ ಜವಾಬ್ದಾರಿ ನಮಗೆ ಬೇಡ ಎನ್ನುವ ಕೋರಿಕೆಯನ್ನು ಸಂಬಂಧ ಪಟ್ಟ ಹಿರಿಯ ಅಧಿಕಾರಿಗಳ ಬಳಿ ಲಿಖಿತ ಮನವಿ ಸಲ್ಲಿಸಿ ನಿಯೋಜನೆ ಯನ್ನು ರದ್ದು ಪಡಿಸಿ ಕೊಂಡು ಹೋಗುತ್ತಿದ್ದಾರೆ

ಇದಕ್ಕೆ ಪೂರ್ವ ಕ ವಾಗಿ ಮಾನ್ಯ ಆಯುಕ್ತರು ಮಾನ್ಯ ಪ್ರಧಾನ ಕಾರ್ಯದರ್ಶಿ ರವರು ಈ ಮೊದಲಿನ ನಿಯೋಜನೆ ಉಪ ನಿರ್ದೇಶಕರು ಸಹ ನಿರ್ದೇಶಕರ ಆದೇಶ ವನ್ನು ರದ್ದು ಪಡಿಸಿ ಮೂಲ ಕಛೇರಿ ಗೆ ದಿನಾಂಕ 23.08.2026.ರಂದು ಸ್ಥಳ ನಿಯುಕ್ತಿಯ ಆದೇಶವನ್ನು ಮಾಡಿರುತ್ತಾರೆ ಉದಾ ಬೆಂಗಳೂರು ವಿಭಾಗ ೦1 ರ ಸಹ ನಿರ್ದೇಶಕರು ಎನ್ನುವ ಮಾತು ಗಳು ಕೇಳಿ ಬಂದಿರುತ್ತದೆ ಆದ್ದರಿಂದ ವಿವಿಧ ವಿಭಾಗ ವಿವಿಧ ಕಛೇರಿ ಯಲ್ಲಿ ಸಹ ನಿರ್ದೇಶಕರ ಖಾಲಿ ಇರುವ ಸಹ ನಿರ್ದೇಶಕರ ಹುದ್ದೆಗಳಿಗೆ ಹಿರಿಯ ಉಪ ನಿರ್ದೇಶಕರಿಗೆ ಡಿ.ಪಿ.ಸಿ  ಕಾರ್ಯ ಭಾರವನ್ನು ಆದೇಶಿಸಿ ನಂತರ ಖಾಲಿ ಇರುವ ಸಹ ನಿರ್ದೇಶಕರು ಹುದ್ದೆಗೆ ಬಡ್ತಿ ಸೌಲಭ್ಯ ವನ್ನು ಕಲ್ಪಿಸಿ ಕೊಡಬೇಕಾಗಿರು ತ್ತದೆ

ಹಾಗೂ ಇದರಿಂದ ಎಲ್ಲಾ ಹಂತದ ಬಡ್ತಿ ಸೌಲಭ್ಯವನ್ನು ಮಾನ್ಯ ಅಧಿಕಾರಿ ವೃಂದದವರಿಗೂ ಸಹ ಕಾಲ ಕಾಲಕ್ಕೆ ನೀಡುವುದರಿಂದ  ಎಲ್ಲಾ ಸಮುದಾಯದ ಅಧಿಕಾರಿವರ್ಗ ದವರಿಗೆ ಬಡ್ತಿ ಸೌಲಭ್ಯವನ್ನು ಪಡೆದು ಕೊಂಡು ಅಧಿಕಾರ ನಿರ್ವಹಣೆಯನ್ನು ಮಾಡಲು ಅನುಕೂಲವಾಗುತ್ತದೆ ಆದ್ದರಿಂದ ಸನ್ಮಾನ್ಯ ಶ್ರೀ ಮಧು ಬಂಗಾರಪ್ಪ ಸರ್ ರವರು ಸದರಿ ಖಾಲಿ ಇರುವ ಸಹ ನಿರ್ದೇಶಕರ ಹುದ್ದೆಗಳಿಗೆ ಬಡ್ತಿ ಸೌಲಭ್ಯ ವನ್ನು ಕಲ್ಪಿಸಿ ಕೊಡುವ ವಿಚಾರವಾಗಿ ಮಾನ್ಯ ಪ್ರಧಾನ ಕಾರ್ಯದರ್ಶಿ ರವರು ಮಾನ್ಯ ಆಯುಕ್ತರು ಶಾಲಾ ಶಿಕ್ಷಣ ಇಲಾಖೆ ಬೆಂಗಳೂರು ರವರಿಗೆ ತಮ್ಮ ಮೂಲಕ ಸೂಕ್ತ ರೀತಿಯ ಆದೇಶ ವನ್ನು ಜಾರಿ ಮಾಡಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ಕೋರಿಕೆಯ ಮನವಿ ಹಾಗೂ ಶಾಲಾ ಶಿಕ್ಷಣ ಇಲಾಖೆಯ ಸಿಬ್ಬಂದಿ ವರ್ಗ ದವರ ಮನವಿಯ ಸಮಸ್ಯೆಗಳನ್ನು ಪರಿಹಾರ ಕೈಗೊಳ್ಳುವ ವಿಚಾರ ಸಂಬಂಧ ಮಾನ್ಯ ಹಿರಿಯ ಅಧಿಕಾರಿಗಳ ಜೊತೆಗೆ ಮಾತನಾಡಿ ಬಾಕಿ ಇರುವ ಶಿಕ್ಷಕರ ಮನವಿಗಳನ್ನು ಪರಿಶೀಲನೆ ಮಾಡಿ ಸೂಕ್ತ ಆದೇಶಗಳನ್ನು ಕಲ್ಪಿಸಿ ಕೊಡುವುದು ಹಾಗೂ ಅತೀ ತುರ್ತಾಗಿ ಸಹ ನಿರ್ದೇಶಕರು ಹುದ್ದೆಗೆ ಬಡ್ತಿ ಸೌಲಭ್ಯ ವನ್ನು ಕಲ್ಪಿಸಿ ಕೊಡಲು ಈ ಮೂಲಕ  ಈ ಮೇಲ್ಕಂಡ ಮನವಿ ಅನುಸಾರ ಖಾಲಿ ಇರುವ ಜಂಟಿ.

ಸಹ ನಿರ್ದೇಶಕರು ಹುದ್ದೆಗೆ ಬಡ್ತಿ ಸೌಲಭ್ಯವನ್ನು ಕಲ್ಪಿಸಿ ಕೊಡಲು ಈ ಮೂಲಕ ತಮ್ಮಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ವೃಂದ ಶಾಲಾ ಶಿಕ್ಷಣ ಇಲಾಖೆಯ ಸಿಬ್ಬಂದಿ ವೃಂದ ಈ ಮೂಲಕ ತಮ್ಮಲ್ಲಿ ಕೋರುತ್ತೇವೆ..ಗೌರವ ಪೂರ್ವಕ ವಾಗಿ ಕೋರುತ್ತೇವೆ ಗೌರವ ವಂದನೆಗಳು  ಇಂತಿ ತಮ್ಮ ನಂಬುಗೆಯ ಸಮಸ್ತ ಕರ್ನಾಟಕ ರಾಜ್ಯ ಸರ್ಕಾರಿ ಅನುದಾನಿತ ಪ್ರಾಥಮಿಕ ಸಹ ಶಿಕ್ಷಕರ ಮುಖ್ಯ ಶಿಕ್ಷಕರ ವೃಂದ ಮತ್ತು ಸರ್ಕಾರಿ ಅನುದಾನಿತ ಪ್ರೌಢ ಶಾಲಾ ಶಿಕ್ಷಕರ ವೃಂದ ಹಾಗೂ ಸಮಸ್ತ ಶಾಲಾ ಶಿಕ್ಷಣ ಇಲಾಖೆಯ ಸಿಬ್ಬಂದಿ ವೃಂದ ಕರ್ನಾಟಕ ರಾಜ್ಯ

ಸಮಸ್ತ ಶಿಕ್ಷಕರ ಬಳಗ.....

ಸುದ್ದಿ ಸಂತೆ ನ್ಯೂಸ್ ಬೆಂಗಳೂರು.....

Author
Ravikumar Ullagaddi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕರಿಗೆ ಮತ್ತೊಂದು ಜವಾಬ್ದಾರಿ.....ಶೀಘ್ರದಲ್ಲೇ ಶಿಕ್ಷಕರಿಂದ ನಡೆಯಲಿದೆ.....ಶಾಲಾ ಗೇಟ್‌ಗೆ ಬೀಗ ಹಾಕಿ ಮಲಗಿದ ಮುಖ್ಯಶಿಕ್ಷಕ.....IPS ಅಧಿಕಾರಿಗಳ ವರ್ಗಾವಣೆ ರಾಜ್ಯದಲ್ಲಿ ಮುಂದುವರಿದ ವರ್ಗಾವಣೆ ಪ್ರಕ್ರಿಯೆ.....ಶಿಕ್ಷಕರ ಕಡ್ಡಾಯ ವರ್ಗಾವಣೆ ಗೆ ಆಗ್ರಹ ವರ್ಗಾವಣೆ ವಿಚಾರದಲ್ಲಿ ನಾಡಿನ ಶಿಕ್ಷಕರ ಆಕ್ರೋಶ.....ರಾಜ್ಯದ ಶಾಲೆಗಳ ಮಧ್ಯಂತರ ವರದಿ ಸಲ್ಲಿಸಿದ ವಿಶೇಷ ಸದನ ಸಮಿತಿ.....ವರದಿಯಲ್ಲಿ ಏನೇನಿದೆ ಗೊತ್ತಾ.....ಶಿಕ್ಷಣ ಸಚಿವರಿಗೆ ರಕ್ತದಲ್ಲಿ ಪತ್ರ ಬರೆದ ಶಿಕ್ಷಕ.....ಶಿಕ್ಷಕ ಪ್ರಶಾಂತ ಪತ್ರ ವೈರಲ್.....ಶಿಕ್ಷಕ'ನೇ ಶ್ರೇಷ್ಠ ಸಮೀಕ್ಷಾ ವರದಿಯಲ್ಲಿ ಪತ್ತೆ.....ಶಿಕ್ಷಕರ ಕಾರ್ಯಕ್ಕೆ ಸಾಕ್ಷಿಯಾದ ವರದಿ.....ಸರ್ಕಾರಿ ಶಾಲೆಗೆ ಬಂತು ಹೊಸದೊಂದು ಕಾರ್ಯಕ್ರಮ ಶಿಕ್ಷಕರಿಗೆ ಮತ್ತೊಂದು ತಲೆನೋವು ಜವಾಬ್ದಾರಿ.....ಅಂತರ ಶಾಲಾ ಕ್ರೀಡಾಕೂಟ ಅವ್ಯವಸ್ಥೆಯ ಆಗರ ವಿದ್ಯಾರ್ಥಿಗಳ ಪರದಾಟ.....BEO ಕಚೇರಿಯಲ್ಲಿ ಶಿಕ್ಷಕರ ಸಂಘದ ಕಿತ್ತಾಟ ಆಗಿದ್ದಾದರೂ ಏನು.....