LIVE TV LocalCrimeNationalInternationalPoliticsEducationTechnologyEntertainmentSportsFeature
Local News

ತೆಲೆಮರಿಸಿಕೊಂಡಿದ್ದ 5 ಜನ ದರೋಡೆಕೋರರ ಬಂಧನ - 7 ಲಕ್ಷ ನಗದು ಹಣ ವಶ.

ಹುಬ್ಬಳ್ಳಿ -

ತೆಲೆಮರಿಸಿಕೊಂಡಿದ್ದ 5 ಜನರ ದರೋಡೆಕೋರ‌ನ್ನು ಹಳೇ ಹುಬ್ಬಳ್ಳಿಯ ಪೊಲೀಸರು ಬಂಧನ ಮಾಡಿದ್ದಾರೆ‌. ಬಂಧಿತರಿಂದ 7 ಲಕ್ಷ ನಗದು ಹಣ ವಶವನ್ನು ತೆಗೆದುಕೊಳ್ಳಲಾಗಿದೆ .

ದಿನಾಂಕ:- 21.01.2019 ರಂದು ಶಿರಸಿಯಿಂದ ಅಬ್ದುಲ್‍ರಜಾಕ್ ಬೋಂಗ ಇವರು ವ್ಯವಹಾರಕ್ಕೆ ಸಂಬಂಧಪಟ್ಟ 35 ಲಕ್ಷ ರೂ. ನಗದು ಹಣವನ್ನು ತೆಗೆದುಕೊಂಡು ಹುಬ್ಬಳ್ಳಿ ಹೊಸ ಬಸ್ ನಿಲ್ದಾಣದಿಂದ ತಮ್ಮ ಊರಿಗೆ ಹೋಗುವ ಮಂಗಳೂರ ಬಸ್ಸನ್ನು ಹತ್ತಿ ಹೋಗುವಾಗ ಕಾರವಾರ ರೋಡ ಟೋಲ ಪ್ಲಾಜಾ ಹತ್ತಿರ ಬೈಪಾಸ್ ರಸ್ತೆಯ ಮೇಲೆ ಯಾರೋ ಎರಡು ಜನರು ಬಸ್ಸಿನಲ್ಲಿ ಅಬ್ದುಲ್‍ರಜಾಕ ಇವರೊಂದಿಗೆ ಏಕಾಏಕಿ ನಮ್ಮ ತಂಗಿ ಎಲ್ಲಿ ಇದ್ದಾಳೆ ಹೇಳು ಅನ್ನುತ್ತಾ ಕೈಯಿಂದ ಹೊಡಿಬಡಿ ಮಾಡಿ, ಬಸ್ ನಿಲ್ಲಿಸಿ, ಕೆಳಗೆ ಇಳಿಸಿ ದೂಡಾಡಿ ನಗದು ಹಣ ಇದ್ದ ಬ್ಯಾಗನ್ನು ಕಿತ್ತುಕೊಂಡು ಪರಾರಿಯಾಗಿ ಹೋಗಿದ್ದರು.

ಈ ಬಗ್ಗೆ ಅಬ್ದುಲ್‍ರಜಾಕ್ ಇವರು ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಇತ್ತು. ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ರವರಾದ ಎಸ್.ಎಸ್. ಕಮತಗಿ ಇವರ ನೇತೃತ್ವದಲ್ಲಿ ವಿಶೇಷವಾದ ತಂಡವನ್ನು ರಚಿಸಿದ್ದರು. ಸದರಿ ತಂಡವು ಈ ಪ್ರಕರಣದ ಬಗ್ಗೆ ಕೂಲಂಕುಷವಾಗಿ ಚಾಣಾಕ್ಷತನದಿಂದ ತನಿಖೆ ಕೈಕೊಂಡು ಈ ಪ್ರಕರಣದಲ್ಲಿ 05 ಜನ ಆರೋಪಿತರನ್ನು ಬಂಧನ ಮಾಡಿದ್ದಾರೆ.

ಖಾಜಾ ತಂದೆ ಮಹಮ್ಮದ ಯುಸೂಫ ದುಖಾನದಾರ , ಹುಬ್ಬಳ್ಳಿಯ ಬದಾದಾಪೀರ ತಂದೆ ವಜೀರ ಅಹಮ್ಮದ ನದಾಫ ವಯಾ: 32 ವರ್ಷ ಸಾ: ಹುಬ್ಬಳ್ಳಿ ರೇಲ್ವೆ ರಸೂಲಖಾನ@ಖಾಲಾ ರಸೂಲ ತಂದೆ ನಜೀರಅಹ್ಮದ ಬಾಗಲಕೋಟ ವಯಾ 38 ವರ್ಷ ಸಾ:ಹುಬ್ಬಳ್ಳಿ ಇವರನ್ನು ಪತ್ತೆ ಮಾಡಿ ದಿನಾಂಕ 19.01.2021 ರಂದು ದಸ್ತಗೀರ ಮಾಡಿ ಈ ಪ್ರಕರಣದಲ್ಲಿ ದರೋಡೆ ಮಾಡಿಕೊಂಡು ಹೋ್ಉ

ಹೋದ ಹಣದ ಪೈಕಿ 7,00,000/- ರೂ. ನಗದು ಹಣವನ್ನು ಹಾಗೂ ಒಂದು ಇಂಡಿಗೋ ಕಾರ, ಒಂದು ಸ್ಪ್ಲೆಂಡರ್ ಪ್ಲಸ್ ಮೋಟಾರ್ ಸೈಕಲ್ ಹಾಗೂ ಒಂದು ಡಿಯೋಮೋಟಾರ್ ಸೈಕಲ್ಲನ್ನು ಜಪ್ತಿ ಮಾಡಿ ಆರೋಪಿತರಿಗೆ ಮಾನ್ಯ ನ್ಯಾಯಾಲಯಕ್ಕೆ ಹಾಜರಪಡಿಸಿದ್ದು ಇರುತ್ತದೆ. ಈ ಪ್ರಕರಣವನ್ನು ಬೇಧಿಸಿದ ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ರವರಾದ ಶ್ರೀ ಎಸ್.ಎಸ್. ಕಮತಗಿ ಹಾಗೂ ಅವರ ತಂಡದ ಕಾರ್ಯವೈಖರಿಯನ್ನು ಪೊಲೀಸ್ ಆಯುಕ್ತರು ಹುಬ್ಬಳ್ಳಿ-ಧಾರವಾಡ ರವರು ಶ್ಲಾಘಿಸಿರುತ್ತಾರೆ.

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕರಿಗೆ ಮತ್ತೊಂದು ಜವಾಬ್ದಾರಿ.....ಶೀಘ್ರದಲ್ಲೇ ಶಿಕ್ಷಕರಿಂದ ನಡೆಯಲಿದೆ.....ಶಾಲಾ ಗೇಟ್‌ಗೆ ಬೀಗ ಹಾಕಿ ಮಲಗಿದ ಮುಖ್ಯಶಿಕ್ಷಕ.....IPS ಅಧಿಕಾರಿಗಳ ವರ್ಗಾವಣೆ ರಾಜ್ಯದಲ್ಲಿ ಮುಂದುವರಿದ ವರ್ಗಾವಣೆ ಪ್ರಕ್ರಿಯೆ.....ಶಿಕ್ಷಕರ ಕಡ್ಡಾಯ ವರ್ಗಾವಣೆ ಗೆ ಆಗ್ರಹ ವರ್ಗಾವಣೆ ವಿಚಾರದಲ್ಲಿ ನಾಡಿನ ಶಿಕ್ಷಕರ ಆಕ್ರೋಶ.....ರಾಜ್ಯದ ಶಾಲೆಗಳ ಮಧ್ಯಂತರ ವರದಿ ಸಲ್ಲಿಸಿದ ವಿಶೇಷ ಸದನ ಸಮಿತಿ.....ವರದಿಯಲ್ಲಿ ಏನೇನಿದೆ ಗೊತ್ತಾ.....ಶಿಕ್ಷಣ ಸಚಿವರಿಗೆ ರಕ್ತದಲ್ಲಿ ಪತ್ರ ಬರೆದ ಶಿಕ್ಷಕ.....ಶಿಕ್ಷಕ ಪ್ರಶಾಂತ ಪತ್ರ ವೈರಲ್.....ಶಿಕ್ಷಕ'ನೇ ಶ್ರೇಷ್ಠ ಸಮೀಕ್ಷಾ ವರದಿಯಲ್ಲಿ ಪತ್ತೆ.....ಶಿಕ್ಷಕರ ಕಾರ್ಯಕ್ಕೆ ಸಾಕ್ಷಿಯಾದ ವರದಿ.....ಸರ್ಕಾರಿ ಶಾಲೆಗೆ ಬಂತು ಹೊಸದೊಂದು ಕಾರ್ಯಕ್ರಮ ಶಿಕ್ಷಕರಿಗೆ ಮತ್ತೊಂದು ತಲೆನೋವು ಜವಾಬ್ದಾರಿ.....ಅಂತರ ಶಾಲಾ ಕ್ರೀಡಾಕೂಟ ಅವ್ಯವಸ್ಥೆಯ ಆಗರ ವಿದ್ಯಾರ್ಥಿಗಳ ಪರದಾಟ.....BEO ಕಚೇರಿಯಲ್ಲಿ ಶಿಕ್ಷಕರ ಸಂಘದ ಕಿತ್ತಾಟ ಆಗಿದ್ದಾದರೂ ಏನು.....