LIVE TV LocalCrimeNationalInternationalPoliticsEducationTechnologyEntertainmentSportsFeature
State News

ಲೋಕಸಭಾ ಚುನಾವಣೆ ನಂತರ ರಾಜ್ಯದಲ್ಲಿ‌ ಬಹುದೊಡ್ಡ ಬದಲಾವಣೆ ಬಾಂಬ್ ಸಿಡಿಸಿದ ಮಹೇಶ್ ತೆಂಗಿನಕಾಯಿ - ಕಾದು ನೋಡಿ ಎಂದ್ರು ಶಾಸಕರು ತೀವ್ರ ಕುತುಜಲ ಕೆರಳಿಸಿದ ಹೇಳಿಕೆ.....

ಹುಬ್ಬಳ್ಳಿ -

ಲೋಕಸಭಾ ಚುನಾವಣೆಯ ನಂತರ ರಾಜ್ಯದಲ್ಲಿ ಬಹುದೊಡ್ಡ ಪ್ರಮಾಣದ ಬೆಳವಣಿಗೆ ಯಾಗಲಿದೆ ಎಂದು ಬಿಜೆಪಿ ಶಾಸಕ ಮಹೇಶ್ ತೆಂಗಿನಕಾಯಿ ಹೇಳಿದರು. ಹುಬ್ಬಳ್ಳಿ ಯಲ್ಲಿ ಮಾತನಾಡಿದ ಅವರು ಕಾದು ನೋಡಿ ಎನ್ನುತ್ತಾ ಹೊಸ ಬಾಂಬ್ ಸಿಡಿಸಿದರು ಮಹೇಶ್ ತೆಂಗಿನಕಾಯಿ.

ಮಹೇಶ್ ತೆಂಗಿನಕಾಯಿ ಹುಬ್ಬಳ್ಳಿ ಧಾರವಾಡ ಕೇಂದ್ರ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಶಾಸಕ ರಾಗಿದ್ದು ಲೋಕಸಭಾ ಚುನಾವಣೆ ನಂತರ ರಾಜ್ಯದಲ್ಲಿ‌ ಬಹುದೊಡ್ಡ ಬದಲಾವಣೆಯಾಗಲಿದೆ

ನಾವು ವಿರೋಧ ಪಕ್ಷದವರಾಗಿ‌ ಸರ್ಕಾರದ ಅಂಕು ಡೊಂಕುಗಳನ್ನ ತಿದ್ದುವ ಕೆಲಸ ಮಾಡುತ್ತಿದ್ದೇವೆ.ಕಾದು ನೋಡಿ ಲೋಕಸಭೆ ಚುನಾವಣೆ ನಂತರ ಬಹುದೊಡ್ಡ ಬದಲಾವ ಣೆಯಾಗಲಿದೆ ಎಂಬ ಅಚ್ಚರಿಯ ಹೇಳಿಕೆ ಯನ್ನು ನೀಡಿದರು.

ರಾಜಕೀಯ ಬದಲಾವಣೆ‌ ಕುರಿತು‌ ಹುಬ್ಬಳ್ಳಿ ಯಲ್ಲಿ‌ ಹೊಸ ಬಾಂಬ್ ಸಿಡಿಸಿದ ಶಾಸಕ‌ ಮಹೇಶ ಟೆಂಗಿನಕಾಯಿ.ಪಕ್ಷದ‌ ನಿಯಮಾನುಸಾರವಾಗಿ ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ಇಂದು ಕಾರ್ಯಕಾ ರಿಣಿ‌ ಸಭೆ ನಡೆಸುತ್ತಿದ್ದೇವೆ.

ಲೋಕಸಭಾ ಕ್ಷೇತ್ರಗಳಲ್ಲಿ 28 ಕ್ಷೇತ್ರಗಳನ್ನು ಗೆಲ್ಲುವ ಕುರಿತು ಚರ್ಚೆ ನಡೆಸಲಿದ್ದೇವೆ. ಬಿಜೆಪಿಯಲ್ಲಿ‌ಯಾವುದೇ ನಿರ್ಣಯ‌ ಆದರೂ ಅದನ್ನು ಒಗ್ಗೂಡಿಸಿಕೊಂಡು‌ ನಾವು‌ ಕೆಲಸ‌ ಮಾಡುತ್ತೇವೆ ಎಂದರು.

https://youtu.be/2CcD6N41dno?si=em9C1Fga-cJnBQY_

 

ಇಂದು‌ ಯಾರ್ಯಾರು ಸೇರ್ಪಡೆಯಾಗು ತ್ತಾರೋ ಅವರೆಲ್ಲರನ್ನೂ ಒಗ್ಗೂಡಿಸುವ ಕೆಲಸಗಳಾಗುತ್ತವೆ.ದೇಶದಲ್ಲಿ‌ಮೋದಿಯವರನ್ನ‌ಮತ್ತೊಮ್ಮೆ ಪ್ರಧಾನಿಯನ್ನಾಗಿ‌ಮಾಡುವುದೇ ನಮ್ಮ‌ಉದ್ದೇಶ.

ಜಗದೀಶ ಶೆಟ್ಟರ್ ಮನೆಗೆ ಪಕ್ಷದ ಕಾರ್ಯಕರ್ತ ರು‌ತೆರಳದಂತೆ ಸೂಚನೆ ವಿಚಾರ.ಆ ರೀತಿ ಯಾವುದೂ ಇಲ್ಲ ಅವೆಲ್ಲ ಊಹಾಪೋಹಗಳು ಮೊನ್ನೆಯಷ್ಟೇ ಎಲ್ಲರೂ ಒಗ್ಗೂಡಿ‌ವುಜಯೇಂದ್ರ ಅವರ ಮೆರವಣಿಗೆ ಮಾಡಿದ್ದೇವೆ.

https://youtu.be/2CcD6N41dno?si=em9C1Fga-cJnBQY_

 

ಯಾರಿಗೂ ಆ ರೀತಿ ಯಾವುದೇ ಸೂಚನೆ ನೀಡಿಲ್ಲ.ಕಾರ್ಯಕರ್ತರು ಎಲ್ಲ ನಾಯಕರ‌ ಮನೆಗೆ ತೆರಳುವುದು‌ ಸಾಮಾನ್ಯಲೋಕಸಭೆ ಅಭ್ಯರ್ಥಿ ಆಯ್ಕೆ ಮಾಡೋದು ಪಕ್ಷದ ಹೈಕಮಾಂಡ್ ನಾಯಕರ ನಿರ್ಧಾರ

ಪ್ರಹ್ಲಾದ್ ಜೋಶಿಯವರು‌ ಈ‌ ಭಾಗದಲ್ಲಿ ಸಾಕಷ್ಟು ಅಭಿವೃದ್ದಿ ಕೆಲಸಗಳನ್ನ‌ ಮಾಡುತ್ತಿದ್ದಾರೆ. ಧಾರವಾಡ ಜಿಲ್ಲೆಯ ಸರ್ವತೋಮುಖ‌ ಅಭಿ ವೃದ್ದಿ‌ಯನ್ನ‌ ಮಾಡಿದ್ದಾರೆ.ಕಾಂಗ್ರೆಸ್ ದೆಹಲಿ ಯಾತ್ರೆ ವಿಚಾರ

ಕಾಂಗ್ರೆಸ್ ಕೇವಲ ಕರ್ನಾಟಕಕ್ಕೆ ಅನ್ಯಾಯ ಮಾಡಿಲ್ಲ.ಕಾಂಗ್ರೆಸ್ ಸೇರಿದಂತೆ ಎಲ್ಲಾ ಪಕ್ಷದ ಶಾಸಕರಿಗೆ ಅನ್ಯಾಯ ಮಾಡಿದೆ.ಈವರೆಗೂ ಯಾವೊಬ್ಬ ಶಾಸಕರಿಗೂ‌ ಅನುದಾನ ನೀಡದ‌ ಹೀನಾಯ ಪರಿಸ್ಥಿತಿ ಸರ್ಕಾರ ಅನುಭವಿಸುತ್ತಿದೆ

ಗ್ಯಾರಂಟಿ ವಿಚಾರದಲ್ಲಿ ಸಿಎಂ‌ ಹೇಳಬೇಕಿದ್ದ ಹೇಳಿಕೆಯನ್ನ‌ ಬಾಲಕೃಷ್ಣ ಅವರಿಂದ‌ ಹೇಳಿದ್ದಾರೆ ಗ್ಯಾರಂಟಿಗಳು ಬಹುಬೇಗನೇ ಬಂದ್ ಆಗಬೇಕಿತ್ತು‌.ಆದ್ರೆ ಕಾಂಗ್ರೆಸ್ ನವರೇ ಈ‌ ಬಗ್ಗೆ ಹೇಳಿದ್ದಾರೆ ಕಾಂಗ್ರೆಸ್ ನ‌ ಬಹುತೇಕ‌ ಶಾಸಕರಲ್ಲೂ ಈ‌ ಬಗ್ಗೆ ಅಸಮಾಧಾನವಿದೆ ಎಂದರು.

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ.....

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕರಿಗೆ ಮತ್ತೊಂದು ಜವಾಬ್ದಾರಿ.....ಶೀಘ್ರದಲ್ಲೇ ಶಿಕ್ಷಕರಿಂದ ನಡೆಯಲಿದೆ.....ಶಾಲಾ ಗೇಟ್‌ಗೆ ಬೀಗ ಹಾಕಿ ಮಲಗಿದ ಮುಖ್ಯಶಿಕ್ಷಕ.....IPS ಅಧಿಕಾರಿಗಳ ವರ್ಗಾವಣೆ ರಾಜ್ಯದಲ್ಲಿ ಮುಂದುವರಿದ ವರ್ಗಾವಣೆ ಪ್ರಕ್ರಿಯೆ.....ಶಿಕ್ಷಕರ ಕಡ್ಡಾಯ ವರ್ಗಾವಣೆ ಗೆ ಆಗ್ರಹ ವರ್ಗಾವಣೆ ವಿಚಾರದಲ್ಲಿ ನಾಡಿನ ಶಿಕ್ಷಕರ ಆಕ್ರೋಶ.....ರಾಜ್ಯದ ಶಾಲೆಗಳ ಮಧ್ಯಂತರ ವರದಿ ಸಲ್ಲಿಸಿದ ವಿಶೇಷ ಸದನ ಸಮಿತಿ.....ವರದಿಯಲ್ಲಿ ಏನೇನಿದೆ ಗೊತ್ತಾ.....ಶಿಕ್ಷಣ ಸಚಿವರಿಗೆ ರಕ್ತದಲ್ಲಿ ಪತ್ರ ಬರೆದ ಶಿಕ್ಷಕ.....ಶಿಕ್ಷಕ ಪ್ರಶಾಂತ ಪತ್ರ ವೈರಲ್.....ಶಿಕ್ಷಕ'ನೇ ಶ್ರೇಷ್ಠ ಸಮೀಕ್ಷಾ ವರದಿಯಲ್ಲಿ ಪತ್ತೆ.....ಶಿಕ್ಷಕರ ಕಾರ್ಯಕ್ಕೆ ಸಾಕ್ಷಿಯಾದ ವರದಿ.....ಸರ್ಕಾರಿ ಶಾಲೆಗೆ ಬಂತು ಹೊಸದೊಂದು ಕಾರ್ಯಕ್ರಮ ಶಿಕ್ಷಕರಿಗೆ ಮತ್ತೊಂದು ತಲೆನೋವು ಜವಾಬ್ದಾರಿ.....ಅಂತರ ಶಾಲಾ ಕ್ರೀಡಾಕೂಟ ಅವ್ಯವಸ್ಥೆಯ ಆಗರ ವಿದ್ಯಾರ್ಥಿಗಳ ಪರದಾಟ.....BEO ಕಚೇರಿಯಲ್ಲಿ ಶಿಕ್ಷಕರ ಸಂಘದ ಕಿತ್ತಾಟ ಆಗಿದ್ದಾದರೂ ಏನು.....