LIVE TV LocalCrimeNationalInternationalPoliticsEducationTechnologyEntertainmentSportsFeature
Local News

ಆಕಾಶ ಬುಟ್ಟಿ ಉತ್ಸವ – ಶಾಸಕ ಅರವಿಂದ ಚಾಲನೆ

ಧಾರವಾಡ -

ದೀಪಾವಳಿ ಹಬ್ಬದ ಅಂಗವಾಗಿ ಇದೇ ಮೊದಲ ಬಾರಿಗೆ ಧಾರವಾಡದಲ್ಲಿ ಆಕಾಶ ಬುಟ್ಟಿ ಉತ್ಸವವನ್ನು ಹಮ್ಮಿಕೊಳ್ಳಲಾಗಿತ್ತು.ಧಾರವಾಡದ ಮಾಳಮಡ್ಡಿಯ ಸರ್ಕಾರಿ ಶಾಲೆ ಮುಂದೆ ವೀರ್ ಸಾವರ್ಕರ್ ಗೆಳೆಯರ ಬಳಗದವರು ಆಯೋಜಿಸಿದ್ದರು.ಆಕಾಶ ಬುಟ್ಟಿ ಉತ್ಸವಕ್ಕೇ ಶಾಸಕ ಅರವಿಂದ ಬೆಲ್ಲದ ಚಾಲನೆ ನೀಡಿದ್ರು.

ಆಕಾಶ ಬುಟ್ಟಿಯನ್ನು ಹಾರಿ ಬೀಡುವ ಮೂಲಕ ಉತ್ಸವಕ್ಕೇ ಶಾಸಕರು ಚಾಲನೆ ನೀಡಿದರು.ನಂತರ ಆಕಾಶ ಬುಟ್ಟಿ ಹಾಕೊದು ಹಾರಿಸೋದು ನಮ್ಮ ಸಂಸ್ಕ್ರತಿ ಸಂಪ್ರದಾಯವಾಗಿದ್ದು. ಹೀಗಾಗಿ ಉತ್ಸವದಲ್ಲಿ ಬಗೆ ಬಗೆಯ 150 ರಿಂದ 200 ಆಕಾಶ ಬುಟ್ಟಿಗಳು ನೋಡಲು ಕಂಡು ಬಂದವು. ಇನ್ನೂ ಇದರೊಂದಿಗೆ ಉತ್ಸವದಲ್ಲಿ ಪ್ರಮುಖವಾಗಿ ಆಕಾಶ ಬುಟ್ಟಿ ಕುರಿತಾದ ಮಾಹಿತಿ ಜಾಗೃತಿಯನ್ನು ಸಾರ್ವಜನಿಕರಿಗೆ ತಿಳಿಸಲಾಯಿತು.

ಅಲ್ಲದೇ ಹಬ್ಬ ಹರಿದಿನಗಳಲ್ಲಿ ಇದೊಂದು ನಮ್ಮ ಸಂಸ್ಕ್ರತಿ ನಮ್ಮ ಪರಂಪರೆಯಾಗಿದ್ದು ಅದರ ಮಹತ್ವವನ್ನು ಉತ್ಸವದಲ್ಲಿ ಪರಿಚಯಿಸಿ ಹೇಳಲಾಯಿತು.ಈ ಮಧ್ಯೆ ಇದೇ ಮೊದಲ ಬಾರಿಗೆ ನಗರದಲ್ಲಿ ಆಕಾಶ ಬುಟ್ಟಿಯ ಉತ್ಸವವನ್ನು ಹಮ್ಮಿಕೊಳ್ಳಲಾಗಿತ್ತು. ಪ್ರಥಮ ಆಕಾಶ ಬುಟ್ಟಿ ಉತ್ಸವದಲ್ಲಿ ಬಗೆ ಬಗೆಯ ಆಕಾಶ ಬುಟ್ಟಿಗಳ ಅನಾವರಣವಾಯಿತು.

ಧಾರವಾಡದಲ್ಲಿ ವೀರ ಸಾವರ್ಕರ್ ಗೆಳೆಯರ ಬಳಗದ ವತಿಯಿಂದ ಪ್ರಪ್ರಥಮ ಬಾರಿಗೆ ದೀಪಾವಳಿ ಆಕಾಶ ಬುಟ್ಟಿ ಉತ್ಸವ -2020ಕ್ಕೆ ವಿಶೇಷವಾಗಿ ಅದರಲ್ಲೂ ಅರ್ಥಪೂರ್ಣವಾಗಿ ನಡೆಯಿತು.ಸಾರ್ವಜನಿಕರು ಕೂಡಾ ಅಷ್ಟೇ ಉತ್ಸಾಹದಿಂದ ಪಾಲ್ಗೊಂಡು ಕಣ್ಣ ತುಂಬಾ ವೆರೈಟಿ ವೆರೈಟಿ ಆಕಾಶ ಬುಟ್ಟಿಗಳನ್ನು ನೋಡಿ ಆನಂದಿಸಿ ಹಬ್ಬದೊಂದಿಗೆ ನಮ್ಮ ಸಂಸ್ಕ್ರತಿ ಪರಂಪರೆಯನ್ನು ತಿಳಿದುಕೊಂಡರು. ಇನ್ನೂ ಈ ಒಂದು ಕಾರ್ಯಕ್ರಮದಲ್ಲಿ ವಿವೇಕಾನಂದ ಆಶ್ರಮದ ವಿಜಯಾನಂದ ಸರಸ್ವತಿ ಸ್ವಾಮಿಜಿ ಸಂಘದ ಪ್ರಮುಖರಾದ ಶ್ರೀಧರ್ ನಾಡಗೇರ್ ಮಾಜಿ ಪಾಲಿಕೆ ಸದಸ್ಯರಾದ ಶ್ರೀ ಸಂಜಯ ಕಪಟಕರ ಧಾರವಾಡ ವಿಭಾಗದ ಎಸಿಪಿ ಶ್ರೀಮತಿ ಅನುಷಾ ಸೇರಿದಂತೆ ಹಾಗೂ ವೀರ ಸಾವರ್ಕರ್ ಗೆಳೆಯರ ಬಳಗದ ಮುಖಂಡರು ಸದಸ್ಯರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಶ್ವಿಗೊಳಿಸಿದ್ರು.

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕರಿಗೆ ಮತ್ತೊಂದು ಜವಾಬ್ದಾರಿ.....ಶೀಘ್ರದಲ್ಲೇ ಶಿಕ್ಷಕರಿಂದ ನಡೆಯಲಿದೆ.....ಶಾಲಾ ಗೇಟ್‌ಗೆ ಬೀಗ ಹಾಕಿ ಮಲಗಿದ ಮುಖ್ಯಶಿಕ್ಷಕ.....IPS ಅಧಿಕಾರಿಗಳ ವರ್ಗಾವಣೆ ರಾಜ್ಯದಲ್ಲಿ ಮುಂದುವರಿದ ವರ್ಗಾವಣೆ ಪ್ರಕ್ರಿಯೆ.....ಶಿಕ್ಷಕರ ಕಡ್ಡಾಯ ವರ್ಗಾವಣೆ ಗೆ ಆಗ್ರಹ ವರ್ಗಾವಣೆ ವಿಚಾರದಲ್ಲಿ ನಾಡಿನ ಶಿಕ್ಷಕರ ಆಕ್ರೋಶ.....ರಾಜ್ಯದ ಶಾಲೆಗಳ ಮಧ್ಯಂತರ ವರದಿ ಸಲ್ಲಿಸಿದ ವಿಶೇಷ ಸದನ ಸಮಿತಿ.....ವರದಿಯಲ್ಲಿ ಏನೇನಿದೆ ಗೊತ್ತಾ.....ಶಿಕ್ಷಣ ಸಚಿವರಿಗೆ ರಕ್ತದಲ್ಲಿ ಪತ್ರ ಬರೆದ ಶಿಕ್ಷಕ.....ಶಿಕ್ಷಕ ಪ್ರಶಾಂತ ಪತ್ರ ವೈರಲ್.....ಶಿಕ್ಷಕ'ನೇ ಶ್ರೇಷ್ಠ ಸಮೀಕ್ಷಾ ವರದಿಯಲ್ಲಿ ಪತ್ತೆ.....ಶಿಕ್ಷಕರ ಕಾರ್ಯಕ್ಕೆ ಸಾಕ್ಷಿಯಾದ ವರದಿ.....ಸರ್ಕಾರಿ ಶಾಲೆಗೆ ಬಂತು ಹೊಸದೊಂದು ಕಾರ್ಯಕ್ರಮ ಶಿಕ್ಷಕರಿಗೆ ಮತ್ತೊಂದು ತಲೆನೋವು ಜವಾಬ್ದಾರಿ.....ಅಂತರ ಶಾಲಾ ಕ್ರೀಡಾಕೂಟ ಅವ್ಯವಸ್ಥೆಯ ಆಗರ ವಿದ್ಯಾರ್ಥಿಗಳ ಪರದಾಟ.....BEO ಕಚೇರಿಯಲ್ಲಿ ಶಿಕ್ಷಕರ ಸಂಘದ ಕಿತ್ತಾಟ ಆಗಿದ್ದಾದರೂ ಏನು.....