LIVE TV LocalCrimeNationalInternationalPoliticsEducationTechnologyEntertainmentSportsFeature
Local News

ಅರ್ಥಪೂರ್ಣವಾಗಿ ಗಣರಾಜ್ಯೋತ್ಸವ ಆಚರಣೆ

ಧಾರವಾಡ -

ಸಾಮಾನ್ಯವಾಗಿ ಗಣರಾಜ್ಯೋತ್ಸವ ಕಾರ್ಯಕ್ರಮ ಅಂದರೆ ಅಂದ ಚಂದವಾಗಿ ಬಟ್ಟೆಗಳನ್ನು ಹಾಕಿಕೊಂಡು ಧ್ವಜಾರೋಹಣ ಮಾಡಿ ರಾಷ್ಟ್ರಗೀತೆ ಹೇಳಿ ನಂತರ ಒಂದಿಷ್ಟು ಪೊಟೊ ಗಳನ್ನು ತಗೆಸಿಕೊಂಡರೆ ಮುಗಿತು.ಆದರೆ ಇವೆಲ್ಲದರ ನಡುವೆ ಧಾರವಾಡದ ಗುಳೇದಕೊಪ್ಪ ಸರ್ಕಾರಿ ಶಾಲೆ ವಿಶೇಷವಾದ ಕಾರ್ಯಕ್ರಮವೊಂದಕ್ಕೆ ಸಾಕ್ಷಿಯಾಯಿತು.

ಹೌದು ಈಗಾಗಲೇ ಎರಡು ವರುಷಗಳ ಹಿಂದೆ ಈ ಒಂದು ಶಾಲೆಯ ಹೆಸರಿನಲ್ಲಿ ಧಾರವಾಡದ M R ಜಾಧವ್ ಮತ್ತು ಕುಟುಂಬದವರು 50 ಸಾವಿರ ರೂಪಾಯಿ ದತ್ತಿ ಇಟ್ಟಿದ್ದಾರೆ‌‌.ಪ್ರತಿ ವರುಷ ಈ ಒಂದು ಹಣದಿಂದ ಬರುವ ಬಡ್ಡಿಯಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಬಳಸಲಾಗುತ್ತದೆ. ಗಣರಾಜ್ಯೋತ್ಸವದ ದಿನದಂದು ಈ ಒಂದು ಕಾರ್ಯವನ್ನು ಜಾಧವ್ ಪರಿವಾರದವರು ಮಾಡಿದ್ದು ಸಧ್ಯ ಇವರ ಪ್ರೇರಣೆಯಿಂದ ಇದೇ ಸರ್ಕಾರಿ ಶಾಲೆಗೆ ಇಬ್ಬರು ದತ್ತಿ ಹಣ ಇಟ್ಟಿದ್ದಾರೆ.

ಹೌದು ಓಂ ಸಾಯಿ ಇನ್ಪಾಸ್ಚಚ್ಚರ್ ಸಂಸ್ಥೆಯ ಬಸವರಾಜ ಪಾಟೀಲ ಅವರು ತಾಯಿಯ ಹೆಸರಿನಲ್ಲಿ 11 ಸಾವಿರ ಅನ್ನು ದತ್ತಿ ಇಟ್ಟಿದ್ದಾರೆ. ಇಂದು ಶಾಲೆಯಲ್ಲಿ ಈ ಒಂದು ಕಾರ್ಯವನ್ನು ಮಾಡಿದರು.

ಇವರೊಂದಿಗೆ ಇದೇ ಮೊದಲ ಬಾರಿಗೆ ಗುಳೇದಕೊಪ್ಪ ಗ್ರಾಮದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾಗಿ ಆಯ್ಕೆಯಾದ ಗುರುಪಾದ ನಾಗಪ್ಪ ಅಪ್ಪನ್ನವರ ಕೂಡಾ 10 ಸಾವಿರ ರೂಪಾಯಿ ದತ್ತಿ ಇಟ್ಟರು.

ಜಾಧವ್ ಪರಿವಾರದವರನ್ನು ನೋಡಿ ಈಗ ಇಬ್ಬರು ಇದೇ ಶಾಲೆಯನ್ನು ದತ್ತಿ ತಗೆದುಕೊಂಡಿದ್ದಾರೆ. ಇನ್ನೂ ಇದೇ ವೇಳೆ ಮನೋಜ್ ಸಂಗೊಳ್ಳಿ ಅವರು ಶಾಲಾ ಮಕ್ಕಳಿಗೆ ನೋಟ್ ಬುಕ್ ಮತ್ತು ಪೆನ್ ಗಳನ್ನು ದಾನವಾಗಿ ನೀಡಿದರು.

ಇನ್ನೂ ಹೀಗೆ ಗಣರಾಜ್ಯೋತ್ಸವ ದಿನದಂದು ವಿಭಿನ್ನವಾಗಿ ಕಾರ್ಯ ಮಾಡಿ ಅರ್ಥ ಪೂರ್ಣ ವಾಗಿ ಆಚರಣೆ ಮಾಡಿ ಮಾದರಿಯಾದರು.

ಇನ್ನೂ ಈ ಒಂದು ಕಾರ್ಯಕ್ರಮದಲ್ಲಿ ಶಿವಾಜಿ ರಾಮಚಂದ್ರ ಜಾಧವ್,M R ಜಾಧವ,Sdmc ಅಧ್ಯಕ್ಷ ರುದ್ರಪ್ಪ ವಾಲಿಕಾರ್,ಮನೋಜ್ ಸಂಗೊಳ್ಳಿ,

ಶಾಲೆಯ ಮುಖ್ಯೋಪಾಧ್ಯಾಯರು ಶಿಕ್ಷಕರು ಶಿಕ್ಷಕಿಯರು ಗ್ರಾಮ ಪಂಚಾಯತಿ ಮಾಜಿ ಹಾಲಿ ಸದಸ್ಯರು

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕರಿಗೆ ಮತ್ತೊಂದು ಜವಾಬ್ದಾರಿ.....ಶೀಘ್ರದಲ್ಲೇ ಶಿಕ್ಷಕರಿಂದ ನಡೆಯಲಿದೆ.....ಶಾಲಾ ಗೇಟ್‌ಗೆ ಬೀಗ ಹಾಕಿ ಮಲಗಿದ ಮುಖ್ಯಶಿಕ್ಷಕ.....IPS ಅಧಿಕಾರಿಗಳ ವರ್ಗಾವಣೆ ರಾಜ್ಯದಲ್ಲಿ ಮುಂದುವರಿದ ವರ್ಗಾವಣೆ ಪ್ರಕ್ರಿಯೆ.....ಶಿಕ್ಷಕರ ಕಡ್ಡಾಯ ವರ್ಗಾವಣೆ ಗೆ ಆಗ್ರಹ ವರ್ಗಾವಣೆ ವಿಚಾರದಲ್ಲಿ ನಾಡಿನ ಶಿಕ್ಷಕರ ಆಕ್ರೋಶ.....ರಾಜ್ಯದ ಶಾಲೆಗಳ ಮಧ್ಯಂತರ ವರದಿ ಸಲ್ಲಿಸಿದ ವಿಶೇಷ ಸದನ ಸಮಿತಿ.....ವರದಿಯಲ್ಲಿ ಏನೇನಿದೆ ಗೊತ್ತಾ.....ಶಿಕ್ಷಣ ಸಚಿವರಿಗೆ ರಕ್ತದಲ್ಲಿ ಪತ್ರ ಬರೆದ ಶಿಕ್ಷಕ.....ಶಿಕ್ಷಕ ಪ್ರಶಾಂತ ಪತ್ರ ವೈರಲ್.....ಶಿಕ್ಷಕ'ನೇ ಶ್ರೇಷ್ಠ ಸಮೀಕ್ಷಾ ವರದಿಯಲ್ಲಿ ಪತ್ತೆ.....ಶಿಕ್ಷಕರ ಕಾರ್ಯಕ್ಕೆ ಸಾಕ್ಷಿಯಾದ ವರದಿ.....ಸರ್ಕಾರಿ ಶಾಲೆಗೆ ಬಂತು ಹೊಸದೊಂದು ಕಾರ್ಯಕ್ರಮ ಶಿಕ್ಷಕರಿಗೆ ಮತ್ತೊಂದು ತಲೆನೋವು ಜವಾಬ್ದಾರಿ.....ಅಂತರ ಶಾಲಾ ಕ್ರೀಡಾಕೂಟ ಅವ್ಯವಸ್ಥೆಯ ಆಗರ ವಿದ್ಯಾರ್ಥಿಗಳ ಪರದಾಟ.....BEO ಕಚೇರಿಯಲ್ಲಿ ಶಿಕ್ಷಕರ ಸಂಘದ ಕಿತ್ತಾಟ ಆಗಿದ್ದಾದರೂ ಏನು.....