LIVE TV LocalCrimeNationalInternationalPoliticsEducationTechnologyEntertainmentSportsFeature
Local News

ಧಾರವಾಡ ಪೊಟೊ ಸ್ಟುಡಿಯೋ ಕಳ್ಳತನ ಭೇಧಿಸಿದ ಪೊಲೀಸರು ಕಳ್ಳತನ ಮಾಡಿದ ಇಬ್ಬರ ಬಂಧನ ವಿದ್ಯಾಗಿರಿ ಪೊಲೀಸರ ಕಾರ್ಯಾಚರಣೆ.....

ಧಾರವಾಡ -

ಕಳೆದ ಎರಡು ದಿನಗಳ ಹಿಂದೆ ಧಾರವಾಡದ ಮಾಳ ಮಡ್ಡಿಯಲ್ಲಿ ನಡೆದ ಸ್ವಾತಿ ಪೊಟೊ ಸ್ಟುಡಿಯೋ ಕಳ್ಳತನ ಪ್ರಕರಣವನ್ನು ವಿದ್ಯಾಗಿರಿ ಪೊಲೀಸರು ಬೇಧಿಸಿದ್ದಾರೆ.

ಕಳ್ಳತನ ನಡೆದ ಕುರಿತು ಸ್ಟುಡಿಯೋ ಮಾಲೀಕ ದತ್ತಪ್ರಸಾದ ರಾಹುಲ್ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲು ಮಾಡಿದ್ದು ಈ ಒಂದು ದೂರು ದಾಖಲಾಗುತ್ತಿದ್ದಂತೆ ಮೇಲಾಧಿಕಾ ರಿಗಳ ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ಮಹಾಂತೇ ಶ್ ಬಸಾಪೂರ ಮತ್ತು ಟೀಮ್ ಕಾರ್ಯಾಚರಣೆ ಮಾಡಿ ಪ್ರಕರಣವನ್ನು ಬೇಧಿಸಿದ್ದಾರೆ

ಹೌದು ಕಾರ್ಯಾಚರಣೆ ನಡೆಸಿ ಕಳ್ಳತನ ಮಾಡಿದ ಇಬ್ಬರು ಮೀಸೆ ಚಿಗರದ ಯುವಕರನ್ನು ಬಂಧನ ಮಾಡಿದ್ದಾರೆ. ಬಂಧಿತರು ಧಾರವಾಡದ ಲಕ್ಷ್ಮೀ ಸಿಂಗನಕೇರಿ ನಿವಾಸಿಗಳಾಗಿದ್ದಾರೆ

ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶ ನದಲ್ಲಿ ಹಾಗೇ ಧಾರವಾಡದ ಎಸಿಪಿ ಅನುಷಾ ಅವರೊಂದಿಗೆ ಆರಂಭಗೊಂಡ ತನಿಖೆ ಎರಡೇ ದಿನಗಳಲ್ಲಿ ವಿದ್ಯಾಗಿರಿ ಪೊಲೀಸರು ಭೇಧಿಸಿದ್ದಾರೆ‌.

ಇನ್ನೂ ಸುನೀಲ್ ಶೀತಿಮನಿ ಮತ್ತು ಮಂಜುನಾಥ ಡಂಬರಿಕೊಪ್ಪ ಇಬ್ಬರು ಬಂಧಿತರಾಗಿದ್ದಾರೆ. ಬಂಧಿತ ರಿಂದ ಕಳ್ಳತನ ಮಾಡಿದ್ದ ನಾಲ್ಕೂವರೆ ಲಕ್ಷ ರೂಪಾಯಿ ಮೌಲ್ಯದ ಕ್ಯಾಮೆರಾ ಹಾಗೂ ಇನ್ನಿತರ ವಸ್ತುಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ

ಇನ್ನೂ ಈ ಒಂದು ಕಾರ್ಯಾಚರಣೆಯಲ್ಲಿ ಇನ್ಸ್ಪೆಕ್ಟರ್ ಮಹಾಂತೇಶ್ ಬಸಾಪೂರ,ಪಿಎಸ್ ಐ ಅಧಿಕಾರಿಗಳಾದ ಸಚಿನಕುಮಾರ ದಾಸರಡ್ಡಿ,ಎಸ್ ಆರ್ ತೆಗೂರ,ದೇವೆಂದ್ರ ಮಾಬಿನಿಂಡಿ,ಬಿ ಎಮ್ ಅಂಗಡಿ,ಸಿಬ್ಬಂದಿಗಳಾದ ಎಮ್ ಎಫ್ ನಧಾಪ್, ಐಪಿ ಬುರ್ಜಿ,ಆರ್ ಕೆ ಅತ್ತಾರ,ಬಿ ಎಮ್ ಪಠಾತ್ ಎಮ್ ಸಿ ಮಂಕಣಿ,ಎಮ್ ಜಿ ಪಾಟೀಲ್,ಎಮ್ ವೈ ಮಾದರ,ಡಿ ಎಸ್ ಸಾಂಗ್ಲಿಕರ,ಎ ಎಮ್ ಹುಯಿಲ ಗೋಳ,ಹೆಚ್ ಕೆ ಘುಡುನಾಯ್ಕರ್, ಸೇರಿದಂತೆ ಹಲವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕರಿಗೆ ಮತ್ತೊಂದು ಜವಾಬ್ದಾರಿ.....ಶೀಘ್ರದಲ್ಲೇ ಶಿಕ್ಷಕರಿಂದ ನಡೆಯಲಿದೆ.....ಶಾಲಾ ಗೇಟ್‌ಗೆ ಬೀಗ ಹಾಕಿ ಮಲಗಿದ ಮುಖ್ಯಶಿಕ್ಷಕ.....IPS ಅಧಿಕಾರಿಗಳ ವರ್ಗಾವಣೆ ರಾಜ್ಯದಲ್ಲಿ ಮುಂದುವರಿದ ವರ್ಗಾವಣೆ ಪ್ರಕ್ರಿಯೆ.....ಶಿಕ್ಷಕರ ಕಡ್ಡಾಯ ವರ್ಗಾವಣೆ ಗೆ ಆಗ್ರಹ ವರ್ಗಾವಣೆ ವಿಚಾರದಲ್ಲಿ ನಾಡಿನ ಶಿಕ್ಷಕರ ಆಕ್ರೋಶ.....ರಾಜ್ಯದ ಶಾಲೆಗಳ ಮಧ್ಯಂತರ ವರದಿ ಸಲ್ಲಿಸಿದ ವಿಶೇಷ ಸದನ ಸಮಿತಿ.....ವರದಿಯಲ್ಲಿ ಏನೇನಿದೆ ಗೊತ್ತಾ.....ಶಿಕ್ಷಣ ಸಚಿವರಿಗೆ ರಕ್ತದಲ್ಲಿ ಪತ್ರ ಬರೆದ ಶಿಕ್ಷಕ.....ಶಿಕ್ಷಕ ಪ್ರಶಾಂತ ಪತ್ರ ವೈರಲ್.....ಶಿಕ್ಷಕ'ನೇ ಶ್ರೇಷ್ಠ ಸಮೀಕ್ಷಾ ವರದಿಯಲ್ಲಿ ಪತ್ತೆ.....ಶಿಕ್ಷಕರ ಕಾರ್ಯಕ್ಕೆ ಸಾಕ್ಷಿಯಾದ ವರದಿ.....ಸರ್ಕಾರಿ ಶಾಲೆಗೆ ಬಂತು ಹೊಸದೊಂದು ಕಾರ್ಯಕ್ರಮ ಶಿಕ್ಷಕರಿಗೆ ಮತ್ತೊಂದು ತಲೆನೋವು ಜವಾಬ್ದಾರಿ.....ಅಂತರ ಶಾಲಾ ಕ್ರೀಡಾಕೂಟ ಅವ್ಯವಸ್ಥೆಯ ಆಗರ ವಿದ್ಯಾರ್ಥಿಗಳ ಪರದಾಟ.....BEO ಕಚೇರಿಯಲ್ಲಿ ಶಿಕ್ಷಕರ ಸಂಘದ ಕಿತ್ತಾಟ ಆಗಿದ್ದಾದರೂ ಏನು.....