LIVE TV LocalCrimeNationalInternationalPoliticsEducationTechnologyEntertainmentSportsFeature
State News

BRTS ತೊಲಗಿಸಿ. ಹುಬ್ಬಳ್ಳಿ ಧಾರವಾಡ ಜನರನ್ನು ರಕ್ಷಿಸಿ ಆರಂಭಗೊಂಡ ಜನಾಂದೋಲನ - ಸಾಮಾಜಿಕ ಜಾಲ ತಾಣಗಳಲ್ಲಿ BRTS ಅವ್ಯವಸ್ಥೆ ಸಿಡಿದೆದ್ದ ಹುಬ್ಬಳ್ಳಿ ಧಾರವಾಡ ಜನತೆ.....

ಧಾರವಾಡ -

BRTS ತೊಲಗಿಸಿ. ಹುಬ್ಬಳ್ಳಿ ಧಾರವಾಡ ಜನರನ್ನು ರಕ್ಷಿಸಿ ಆರಂಭಗೊಂಡ ಜನಾಂದೋಲನ - ಸಾಮಾಜಿಕ ಜಾಲ ತಾಣಗಳಲ್ಲಿ BRTS ಅವ್ಯವಸ್ಥೆ ಸಿಡಿದೆದ್ದ ಹುಬ್ಬಳ್ಳಿ ಧಾರವಾಡ ಜನತೆ

ಹುಬ್ಬಳ್ಳಿ ಧಾರವಾಡ ಅವಳಿ ನಗರದ ಮಧ್ಯೆ ತ್ವರಿತ ಸಾರಿಗೆ ಸೇವೆಯಾಗಿ ಆರಂಭಗೊಂಡಿರುವ BRTS ವ್ಯವಸ್ಥೆ ವಿರುದ್ದ ಆಕ್ರೋಶ ಅಸಮಾಧಾನ ಜೋರಾಗುತ್ತಿದೆ .ಬಸ್ ಗಳು ಆರಂಭಗೊಂಡು ಐದಾರು ವರ್ಷಗಳು ಕಳೆದಿದ್ದು ಸರಿಯಾದ ನಿರ್ವಹಣೆ ವ್ಯವಸ್ಥೆ ಇಲ್ಲದ ಪರಿಣಾಮವಾಗಿ ಬಸ್ ಗಳು ಹಾಳಾಗುತ್ತಿದ್ದು ಹೀಗಾಗಿ ಚಾಲಕರು ಇದರಿಂದಾಗಿ ಬೇಸತ್ತಿದ್ದು ಇದರ ಜೊತೆಯಲ್ಲಿ ವ್ಯವಸ್ಥೆಯನ್ನು ಸರಿ ಮಾಡುವ ಬದಲಿಗೆ ಈಗಷ್ಟೇ ವಿಭಾಗಕ್ಕೆ ಡಿಸಿಯಾಗಿ ಬಂದಿರುವ ಸಿದ್ದಲಿಂಗಯ್ಯ ಅವರು ಚಾಲಕರ ಮೇಲೆಯೆ ದರ್ಪವನ್ನು ತೋರುತ್ತಿದ್ದು ಇದರಿಂದಾಗಿ ಚಾಲಕರು ಕೂಡಾ ಡೂಟಿ ಮಾಡಲು ಹಿಂದೇಟು ಹಾಕುತ್ತಿದ್ದಾರೆ

ಈ ನಡುವೆ ಇತ್ತ ಈ ಒಂದು ಸಾರಿಗೆ ವ್ಯವಸ್ಥೆಯ ವಿರುದ್ದ ಆಕ್ರೋಶಗೊಂಡಿದ್ದು ಅಸಮಾಧಾನ ಗೊಂಡಿದ್ದಾರೆ.ಬಿಆರ್ ಟಿಎಸ್ ತೊಲಗಿಸಿ ಹುಬ್ಬಳ್ಳಿ ಧಾರವಾಡ ಜನತೆಯನ್ನು ರಕ್ಷಿಸಿ ಎಂಬ ದೊಡ್ಡ ಆಂದೋಲವನ್ನು ಆರಂಭ ಮಾಡಿದ್ದಾರೆ ಈ ಒಂದು ಕುರಿತಂತೆ ಈಗಾಗಲೇ ಹಲವು ಬಾರಿ ಹೋರಾಟವನ್ನು ಮಾಡಿರುವ ಅವಳಿ ನಗರದ ಜನತೆ ಸಧ್ಯ ಸಾಮಾಜಿಕ ಜಾಲ ತಾಣಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಹೋರಾಟದ ಆಂದೋ ಲನವನ್ನು ಹುಟ್ಟು ಹಾಕಿದ್ದಾರೆ.

ಈ ಒಂದು ಅವೈಜ್ಞಾನಿಕವಾಗಿರುವ ಬಿಆರ್ ಟಿಎಸ್ ನಿಂದಾಗಿ ಅವಳಿ ನಗರದ ಜನತೆ ಸಾಕಷ್ಟು ತೊಂದರೆಯನ್ನು ಅನುಭವಿಸುತ್ತಿದ್ದು ಅಲ್ಲದೇ ಕೋಟಿ ಕೋಟಿ ರೂಪಾಯಿ ಅನುಧಾನವನ್ನು ಹಾಕಿದರು ಕೂಡಾ ಇದರಿಂದಾಗಿ ಲಾಭವಾಗಿಲ್ಲ ಬದಲಿಗೆ ಸಾರ್ವಜನಿಕರು ಪರದಾಡುತ್ತಿದ್ದು ಈ ಒಂದು ವ್ಯವಸ್ಥೆಯ ವಿರುದ್ದ ಜನತೆ ಹೋರಾಟದ ರೂಪದಲ್ಲಿ ದೊಡ್ಡ ಆಂದೋಲನ ಆರಂಭಗೊಂ ಡಿದೆ.ಸಾಮಾಜಿಕ ಜಾಲ ತಾಣಗಳಲ್ಲಿ ಈ ಒಂದು ಕುರಿತಂತೆ ಜನಾಂದೋಲನ ವನ್ನು ಹುಟ್ಟು ಹಾಕಿರುವ ಪ್ರಗತಿಪರ ಹೋರಾಟಗಾರರು ಯುವಕರು BRTS ತೊಲಗಿಸಿ.

ಹುಬ್ಬಳ್ಳಿ ಧಾರವಾಡ ಜನರನ್ನು ರಕ್ಷಿಸಿ ಎಂಬ ಸಂದೇಶದೊಂದಿಗೆ ಹೋರಾಟಕ್ಕೆ ಕರೆ ಕೊಡುತ್ತಾ ಸಧ್ಯ ಸಾಮಾಜಿಕ ಜಾಲ ತಾಣಗಳಲ್ಲಿ ಹೋರಾಟವು ಆರಂಭಗೊಂಡಿದ್ದು ಸಾಕಷ್ಟು ಪ್ರಮಾಣದಲ್ಲಿ ಜನಾಂದೋಲನ ರೂಪದಲ್ಲಿ ಎಲ್ಲರೂ ಕೈಜೊಡಿಸುತ್ತಿದ್ದಾರೆ.ಇನ್ನಾದರೂ ದೊಡ್ಡ ಪ್ರಮಾಣದಲ್ಲಿ ಜನರು ಹೋರಾಟಕ್ಕೆ ಮುಂದಾ ಗುವ ಮುನ್ನವೇ ಈ ಒಂದು ಅವೈಜ್ಞಾನಿಕವಾದ ಯೋಜನೆಯನ್ನು ಸರಿಪಡಿಸಿ ಇಲ್ಲವಾದರೆ ಬರುವ ದಿನಗಳಲ್ಲಿ ಸಿಡಿದೆಳಲಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಧಾರವಾಡ.....

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕರಿಗೆ ಮತ್ತೊಂದು ಜವಾಬ್ದಾರಿ.....ಶೀಘ್ರದಲ್ಲೇ ಶಿಕ್ಷಕರಿಂದ ನಡೆಯಲಿದೆ.....ಶಾಲಾ ಗೇಟ್‌ಗೆ ಬೀಗ ಹಾಕಿ ಮಲಗಿದ ಮುಖ್ಯಶಿಕ್ಷಕ.....IPS ಅಧಿಕಾರಿಗಳ ವರ್ಗಾವಣೆ ರಾಜ್ಯದಲ್ಲಿ ಮುಂದುವರಿದ ವರ್ಗಾವಣೆ ಪ್ರಕ್ರಿಯೆ.....ಶಿಕ್ಷಕರ ಕಡ್ಡಾಯ ವರ್ಗಾವಣೆ ಗೆ ಆಗ್ರಹ ವರ್ಗಾವಣೆ ವಿಚಾರದಲ್ಲಿ ನಾಡಿನ ಶಿಕ್ಷಕರ ಆಕ್ರೋಶ.....ರಾಜ್ಯದ ಶಾಲೆಗಳ ಮಧ್ಯಂತರ ವರದಿ ಸಲ್ಲಿಸಿದ ವಿಶೇಷ ಸದನ ಸಮಿತಿ.....ವರದಿಯಲ್ಲಿ ಏನೇನಿದೆ ಗೊತ್ತಾ.....ಶಿಕ್ಷಣ ಸಚಿವರಿಗೆ ರಕ್ತದಲ್ಲಿ ಪತ್ರ ಬರೆದ ಶಿಕ್ಷಕ.....ಶಿಕ್ಷಕ ಪ್ರಶಾಂತ ಪತ್ರ ವೈರಲ್.....ಶಿಕ್ಷಕ'ನೇ ಶ್ರೇಷ್ಠ ಸಮೀಕ್ಷಾ ವರದಿಯಲ್ಲಿ ಪತ್ತೆ.....ಶಿಕ್ಷಕರ ಕಾರ್ಯಕ್ಕೆ ಸಾಕ್ಷಿಯಾದ ವರದಿ.....ಸರ್ಕಾರಿ ಶಾಲೆಗೆ ಬಂತು ಹೊಸದೊಂದು ಕಾರ್ಯಕ್ರಮ ಶಿಕ್ಷಕರಿಗೆ ಮತ್ತೊಂದು ತಲೆನೋವು ಜವಾಬ್ದಾರಿ.....ಅಂತರ ಶಾಲಾ ಕ್ರೀಡಾಕೂಟ ಅವ್ಯವಸ್ಥೆಯ ಆಗರ ವಿದ್ಯಾರ್ಥಿಗಳ ಪರದಾಟ.....BEO ಕಚೇರಿಯಲ್ಲಿ ಶಿಕ್ಷಕರ ಸಂಘದ ಕಿತ್ತಾಟ ಆಗಿದ್ದಾದರೂ ಏನು.....