LIVE TV LocalCrimeNationalInternationalPoliticsEducationTechnologyEntertainmentSportsFeature
Local News

ಮಾಜಿ ಕರ್ನಾಟಕ ಕೇಸರಿ ಪೈಲ್ವಾನರಿಗೆ ನುಡಿನಮನ ಸಲ್ಲಿಸಿದ ಶಾಸಕ ಅಮೃತ್ ದೇಸಾಯಿ.....

ಧಾರವಾಡ -

ಧಾರವಾಡ ಜಿಲ್ಲೆಯ ಮಾಜಿ ಕರ್ನಾಟಕ ಕೇಸರಿ ಪೈಲ್ವಾನರಾದ ದಿ.ಬಸಣ್ಣ ಗಾಯಕವಾಡ ,
ದಿ. ಪೈ ಚಂದ್ರು ಕುರವಿನಕೂಪ್ಪ,ದಿ.ಸಯ್ಯದ್ ಮೊರಬ ಹಾಗೂ ದಿ. ಸಂಜು ಮಾನೆ ಅವರು ಕೊರೋನಾ 2 ನೇ ಅಲೆಯಲ್ಲಿ ಮಹಾಮಾರಿಗೆ ತುತ್ತಾಗಿದ್ದು ಇಂದು ಧಾರವಾಡದ ಜ್ಯೋತಿ ತಾಲೀಮಿ ನಲ್ಲಿ ಜಿಲ್ಲಾ ಕುಸ್ತಿ ಸಂಘದಿಂದ ಆಯೋಜಿಸಿದ ನುಡಿ ನಮನ ಕಾರ್ಯಕ್ರಮದಲ್ಲಿ ಶಾಸಕ ಅಮೃತ್ ದೇಸಾಯಿ ಅವರು ಭಾಗವಹಿಸಿ ಪ್ರತಿಷ್ಠಿತ ಪೈಲ್ವಾನರಿಗೆ ನುಡಿನಮನ ಸಲ್ಲಿಸುವದರೊಂದಿಗೆ ಅವರ ಕುಟುಂಬದವರಿಗೆ ಸಾತ್ವನ ತಿಳಿಸಿದರು.

ನಂತರ ಮಾತನಾಡಿದ ಅವರು ಈ ಕೊರೋನಾ ಹೆಮ್ಮಾರಿಯಿಂದ 4 ಜನ ಕರ್ನಾಟಕ ಕೇಸರಿ ಕುಸ್ತಿ ಪೈಲ್ವಾನರನ್ನು ಕಳೆದುಕೊಂಡಿದ್ದು ಬಹಳ ದುಃಖಕರ ಸಂಗತಿಯಾಗಿದ್ದು ಈ ಹಿಂದೆ ಆಯೋಜಿಸಿದ ಕುಸ್ತಿ ಹಬ್ಬದಲ್ಲಿ ಅತಿ ಹೆಚ್ಚು ಉತ್ಸಾಹದಿಂದ ಓಡಾಡಿ ಕುಸ್ತಿಹಬ್ಬವನ್ನು ಯಶಸ್ವಿಗೊಳಿಸಿ ಧಾರವಾಡ ಜಿಲ್ಲೆಯ ಜನತೆಗೆ ಕುಸ್ತಿಯ ರಸದೌತಣ ಬಡಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಹಾಗೂ ಮುಂಬರುವ ದಿನಗಳಲ್ಲಿ ಕಿರಿಯ ಪೈಲ್ವಾನರೆಲ್ಲ ಅವರ ಹಾಕಿಕೊಟ್ಟ ಮಾರ್ಗದಲ್ಲಿ ಶ್ರದ್ಧೆವಹಿಸಿ ನಡೆದುಅಂತಾರಾಷ್ಟ್ರೀಯ ಮಟ್ಟದಲ್ಲಿ ಕುಸ್ತಿ ಪತಾಕೆಯನ್ನು ಹಾರಿಸಬೇಕೆಂದರು

ಈ ಕಾರ್ಯಕ್ರಮದಲ್ಲಿ ಜಿಲ್ಲಾ ಕುಸ್ತಿ ಸಂಘದ ಅಧ್ಯಕ್ಷರಾದ ನಿಂಗರಾಜ ಅಂಗಡಿ,ಜಿನ್ನಪ್ಪ ಕುಂದಗೋಳ, ನಾಗನಗೌಡ ಪಾಟೀಲ್ ,ಮಾಜಿ ಪಾಲಿಕೆ ಸದಸ್ಯರು ಶಿವಾನಂದ ಮುತ್ತಣ್ಣವರ್, ಶ್ರೀನಿವಾಸ್ ಶಾಸ್ತ್ರೀ , ರೆಹಮಾನ್ ಹೋಳಿ, ಧಾರವಾಡ ಜಿಲ್ಲೆಯ ಜ್ಯೋತಿ ತಾಲೀಮು ಹಾಗೂ ಮಾರುತಿ ಗರಡಿ ಮನೆಯ ಮಾಜಿ ಹಾಗೂ ಹಾಲಿ ಪೈಲ್ವಾನರು ಉಪಸ್ಥಿತರಿದ್ದರು.

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕರಿಗೆ ಮತ್ತೊಂದು ಜವಾಬ್ದಾರಿ.....ಶೀಘ್ರದಲ್ಲೇ ಶಿಕ್ಷಕರಿಂದ ನಡೆಯಲಿದೆ.....ಶಾಲಾ ಗೇಟ್‌ಗೆ ಬೀಗ ಹಾಕಿ ಮಲಗಿದ ಮುಖ್ಯಶಿಕ್ಷಕ.....IPS ಅಧಿಕಾರಿಗಳ ವರ್ಗಾವಣೆ ರಾಜ್ಯದಲ್ಲಿ ಮುಂದುವರಿದ ವರ್ಗಾವಣೆ ಪ್ರಕ್ರಿಯೆ.....ಶಿಕ್ಷಕರ ಕಡ್ಡಾಯ ವರ್ಗಾವಣೆ ಗೆ ಆಗ್ರಹ ವರ್ಗಾವಣೆ ವಿಚಾರದಲ್ಲಿ ನಾಡಿನ ಶಿಕ್ಷಕರ ಆಕ್ರೋಶ.....ರಾಜ್ಯದ ಶಾಲೆಗಳ ಮಧ್ಯಂತರ ವರದಿ ಸಲ್ಲಿಸಿದ ವಿಶೇಷ ಸದನ ಸಮಿತಿ.....ವರದಿಯಲ್ಲಿ ಏನೇನಿದೆ ಗೊತ್ತಾ.....ಶಿಕ್ಷಣ ಸಚಿವರಿಗೆ ರಕ್ತದಲ್ಲಿ ಪತ್ರ ಬರೆದ ಶಿಕ್ಷಕ.....ಶಿಕ್ಷಕ ಪ್ರಶಾಂತ ಪತ್ರ ವೈರಲ್.....ಶಿಕ್ಷಕ'ನೇ ಶ್ರೇಷ್ಠ ಸಮೀಕ್ಷಾ ವರದಿಯಲ್ಲಿ ಪತ್ತೆ.....ಶಿಕ್ಷಕರ ಕಾರ್ಯಕ್ಕೆ ಸಾಕ್ಷಿಯಾದ ವರದಿ.....ಸರ್ಕಾರಿ ಶಾಲೆಗೆ ಬಂತು ಹೊಸದೊಂದು ಕಾರ್ಯಕ್ರಮ ಶಿಕ್ಷಕರಿಗೆ ಮತ್ತೊಂದು ತಲೆನೋವು ಜವಾಬ್ದಾರಿ.....ಅಂತರ ಶಾಲಾ ಕ್ರೀಡಾಕೂಟ ಅವ್ಯವಸ್ಥೆಯ ಆಗರ ವಿದ್ಯಾರ್ಥಿಗಳ ಪರದಾಟ.....BEO ಕಚೇರಿಯಲ್ಲಿ ಶಿಕ್ಷಕರ ಸಂಘದ ಕಿತ್ತಾಟ ಆಗಿದ್ದಾದರೂ ಏನು.....