LIVE TV LocalCrimeNationalInternationalPoliticsEducationTechnologyEntertainmentSportsFeature
Local News

ಸುಟ್ಟು ಕರಕಲಾದ ಎರಡು ಮನೆಗಳು - ಬೀದಿ ಪಾಲಾದ ಕುಟುಂಬಗಳು - 6 ಜನರ ಜೀವ ಉಳಿಸಿತು ಮಾವನ ಪೊನ್ ಕರೆ

ಹುಬ್ಬಳ್ಳಿ -

ಶಾರ್ಟ್ ಸರ್ಕ್ಯೂಟ್ ನಿಂದ ಹತ್ತಿಕೊಂಡ ಬೆಂಕಿಯಿಂದ ಎರಡು ಮನೆಗಳು ಬೆಂಕಿಗೆ ಆಹುತಿಯಾದ ಘಟನೆ ಹುಬ್ಬಳ್ಳಿಯ ಸುಳ್ಳ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಶಿವಬಸಪ್ಪ ವಾಲಿ ಮತ್ತು ಕಲ್ಲಪ್ಪ ವಾಲಿ ಎಂಬುವರ ಮನೆಯಲ್ಲಿಯೇ ಈ ಒಂದು ಅವಘಡ ನಡೆದಿದೆ. ತಡರಾತ್ರಿ ಮನೆಯಲ್ಲಿ ದಟ್ಟವಾದ ಹೊಗೆ ಕಾಣಿಸಿಕೊಂಡಿದೆ.

ಎಲ್ಲರೂ ಮನೆಯಲ್ಲಿ ಮಲಗಿದ್ದ ಸಮಯದಲ್ಲಿ ಪೊನ್ ಕರೆಯೊಂದು ಬಂದಿದೆ.ಯಾರೋ ಪೊನ್ ಮಾಡಿದ್ದಾರೆ ಎಂದುಕೊಂಡು ಮನೆಯಲ್ಲಿ ಮಲಗಿದ್ದ ನಂದಿತಾ ಎದ್ದಿದ್ದಾರೆ.ಅವರ ಮಾವ ಪೊನ್ ಮಾಡಿದ್ದು ಇನ್ನೇನು ಪೊನ್ ನಲ್ಲಿ ಮಾತಾಡಬೇಕು ಎನ್ನುವಷ್ಟರಲ್ಲಿ ಕಣ್ಣು ಮುಂದೆ ಕಾಣಿಸಿಕೊಂಡಿದೆ.

https://youtu.be/QrMgDInEddA

ದಟ್ಟವಾದ ಹೊಗೆ ಕಾಣಿಸಿಕೊಂಡಿದ್ದನ್ನು ನೋಡಿದ ನಂದಿತಾ ಕೂಡಲೇ ಎಲ್ಲರನ್ನೂ ಎಬ್ಬಿಸಿದ್ದಾರೆ. ಬೆಂಕಿಯ ಅವತಾರ ನೋಡು ನೋಡುತ್ತಲೆ ಜೋರಾಗಿ ಹತ್ತಿಕೊಂಡಿದೆ.ಕೂಡಲೇ ಎಲ್ಲರೂ ಮನೆಯಿಂದ ಹೊರಗೆ ಬಂದಿದ್ದಾರೆ.

ಇನ್ನೂ ಈ ಒಂದು ಶಾರ್ಟ್ ಸರ್ಕ್ಯೂಟ್ ನಡೆದ ಸುದ್ದಿ ತಿಳಿದ ಗ್ರಾಮದ ಮಂಜುನಾಥ ಬಡಿಗೇರ ಸ್ಥಳಕ್ಕೆ ಆಗಮಿಸಿ ಕೂಡಲೇ ಇದನ್ನು ನೋಡಿದ ಗ್ರಾಮಸ್ಥರು ಮನೆಯಲ್ಲಿದ್ದವರನ್ನು ಹೊರಗೆ ಕರೆದುಕೊಂಡು ಬಂದರು. ನಂತರ ಬೆಂಕಿ ನಂದಿಸುವಷ್ಟರಲ್ಲಿಯೇ ಸಂಪೂರ್ಣವಾಗಿ ಮನೆಯನ್ನು ಆವರಿಸಿಕೊಂಡಿತು ಬೆಂಕಿ. ಎರಡು ಮನೆಗಳಿಗೆ ಹತ್ತಿಕೊಂಡ ಬೆಂಕಿಯಿಂದ ಸುಟ್ಟು ಕರಕಲಾದವು ಮನೆಗಳು.

ಎರಡು ಮನೆಗಳು ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಕರಕಲಾಗಿದ್ದು ಯಾವ ವಸ್ತು ಗುರುತು ಸಿಗಲಾರದಷ್ಟು ಸುಟ್ಟು ಕರಕಲಾಗಿವೆ. ಇನ್ನೂ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಿಯಂತ್ರಣ ಮಾಡಿದರು.ಒಟ್ಟಾರೆ ಒಂದು ಪೊನ್ ಕರೆ ಬರಲಿಲ್ಲ ಅಂದರೆ ಎರಡು ಮನೆಗಳಲ್ಲಿನ ಆರು ಜನರು ಸುಟ್ಟು ಕರಕಲಾಗುತ್ತಿದ್ದರು. ಅದೃಷ್ಟ ತುಂಬಾ ತುಂಬಾ ಚನ್ನಾಗಿದ್ದು ಮನೆಯಲ್ಲಿ ಮಲಗಿದ್ದವರ ಪಾಲಿಗೆ ನಂದಿತಾ ಅವರ ಮಾವನ ಪೊನ್ ಕರೆ ಜೀವ ಉಳಿಸಿದೆ.

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕರಿಗೆ ಮತ್ತೊಂದು ಜವಾಬ್ದಾರಿ.....ಶೀಘ್ರದಲ್ಲೇ ಶಿಕ್ಷಕರಿಂದ ನಡೆಯಲಿದೆ.....ಶಾಲಾ ಗೇಟ್‌ಗೆ ಬೀಗ ಹಾಕಿ ಮಲಗಿದ ಮುಖ್ಯಶಿಕ್ಷಕ.....IPS ಅಧಿಕಾರಿಗಳ ವರ್ಗಾವಣೆ ರಾಜ್ಯದಲ್ಲಿ ಮುಂದುವರಿದ ವರ್ಗಾವಣೆ ಪ್ರಕ್ರಿಯೆ.....ಶಿಕ್ಷಕರ ಕಡ್ಡಾಯ ವರ್ಗಾವಣೆ ಗೆ ಆಗ್ರಹ ವರ್ಗಾವಣೆ ವಿಚಾರದಲ್ಲಿ ನಾಡಿನ ಶಿಕ್ಷಕರ ಆಕ್ರೋಶ.....ರಾಜ್ಯದ ಶಾಲೆಗಳ ಮಧ್ಯಂತರ ವರದಿ ಸಲ್ಲಿಸಿದ ವಿಶೇಷ ಸದನ ಸಮಿತಿ.....ವರದಿಯಲ್ಲಿ ಏನೇನಿದೆ ಗೊತ್ತಾ.....ಶಿಕ್ಷಣ ಸಚಿವರಿಗೆ ರಕ್ತದಲ್ಲಿ ಪತ್ರ ಬರೆದ ಶಿಕ್ಷಕ.....ಶಿಕ್ಷಕ ಪ್ರಶಾಂತ ಪತ್ರ ವೈರಲ್.....ಶಿಕ್ಷಕ'ನೇ ಶ್ರೇಷ್ಠ ಸಮೀಕ್ಷಾ ವರದಿಯಲ್ಲಿ ಪತ್ತೆ.....ಶಿಕ್ಷಕರ ಕಾರ್ಯಕ್ಕೆ ಸಾಕ್ಷಿಯಾದ ವರದಿ.....ಸರ್ಕಾರಿ ಶಾಲೆಗೆ ಬಂತು ಹೊಸದೊಂದು ಕಾರ್ಯಕ್ರಮ ಶಿಕ್ಷಕರಿಗೆ ಮತ್ತೊಂದು ತಲೆನೋವು ಜವಾಬ್ದಾರಿ.....ಅಂತರ ಶಾಲಾ ಕ್ರೀಡಾಕೂಟ ಅವ್ಯವಸ್ಥೆಯ ಆಗರ ವಿದ್ಯಾರ್ಥಿಗಳ ಪರದಾಟ.....BEO ಕಚೇರಿಯಲ್ಲಿ ಶಿಕ್ಷಕರ ಸಂಘದ ಕಿತ್ತಾಟ ಆಗಿದ್ದಾದರೂ ಏನು.....